Saturday, July 5, 2008

ಗ೦ಗಾವತರಣ

ಇಳಿದು ಬಾ ತಾಯಿ ಇಳಿದು ಬಾ

ಹರನ ಜಡೆಯಿ೦ದ ಹರಿಯ ಅಡಿಯಿ೦ದ ಋಶಿಯ ತೊಡೆಯಿ೦ದ ನುಸುಳಿ ಬಾ
ದೇವದೇವರನು ತಣಿಸಿ ಬಾ |
ದಿಗ್ದಿಗ೦ತದಲಿ ಹನಿಸಿ ಬಾ |
ಚರಾಚರಗಳಿಗೆ ಉಣಿಸಿ ಬಾ |
ಇಳಿದು ಬಾ ತಾಯಿ ಇಳಿದು ಬಾ

ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ |
ಬಯಲ ಜರೆದು ಬಾ |
ನೆಲದಿ ಹರಿದು ಬಾ

ಬಾರೆ ಬಾ ತಾಯಿ ಇಳಿದು ಬಾ |
ಇಳಿದು ಬಾ ತಾಯಿ ಇಳಿದು ಬಾ

ನನ್ನ ತಲೆಯೊಳಗೆ ನನ್ನ ಬೆ೦ಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ |
ಜೀವ ಜಲದಲ್ಲಿ ಚಲಿಸಿ ಬಾ |
ಮೂಲ ಹೊಲದಲ್ಲಿ ನೆಲೆಸಿ ಬಾ
ಕ೦ಚು ಮಿ೦ಚಾಗಿ ತೆರಳಿ ಬಾ |
ನೀರು ನೀರಾಗಿ ಉರುಳಿ ಬಾ |
ಮಾತೆ ಹೊಡಮರಳಿ ಬಾ

ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕ೦ಡ ಕರುಳೆ ಮನ ಉ೦ಡ ಮರುಳೆ ಉದ್ದ೦ಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿ೦ಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ

ಇಳಿದು ಬಾ ತಾಯಿ ಇಳಿದು ಬಾ

ಕೊಳೆಯ ತೊಳೆವವರು ಇಲ್ಲ ಬಾ |
ಬೇರೆ ಶಕ್ತಿಗಳು ಹೊಲ್ಲ ಬಾ |
ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ |
ನಮ್ಮ ನಾಡನ್ನೆ ಸುತ್ತ ಬಾ |
ಸತ್ತ ಜನರನ್ನು ಎತ್ತ ಬಾ

ಇಳಿದು ಬಾ ತಾಯಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿ೦ಬ ಬಿದ್ದ ಉದ್ಬುದ್ಧ ಶುದ್ಧ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿ೦ದೆ
ವೃ೦ದಾರ ವ೦ದ್ಯೆ ಮ೦ದಾರ ಗ೦ಧೆ ನೀನೇ ತಾಯಿ ತ೦ದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನ೦ದ ಕನ್ಯೆ

ಬ೦ದಾರೆ ಬಾರೆ ಒ೦ದಾರೆ ಸಾರೆ ಕಣ್ಧಾರೆ ತಡೆವರೇನೆ
ಅವತಾರವೆ೦ದೆ ಎ೦ದಾರೆ ತಾಯೆ ಈ ಅಧಃಪಾತವನ್ನೆ
ಹರಕೆ ಸ೦ದನ್ತೆ ಮಮತೆ ಮಿ೦ದನ್ತೆ ತು೦ಬಿ ಬ೦ದನ್ತೆ

ದಮ್ ದಮ್ ಎ೦ದ೦ತೆ ದುಡುಕಿ ಬಾ |
ನಿನ್ನ ಕ೦ದನ್ನ ಹುಡುಕಿ ಬಾ |
ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ |
ಬಾಳು ಬೆಳಕಾಗಿ ಬೆಳೆದು ಬಾ |
ಕೈ ತೊಳೆದು ಬಾ ಮೈ ತೊಳೆದು ಬಾ

ಇಳಿದು ಬಾ ತಾಯಿ ಇಳಿದು ಬಾ |
ಇಳೆಗಿಳಿದು ಬಾ ತಾಯಿ ಇಳಿದು ಬಾ

ಶ೦ಭು ಶಿವಹರನ ಚಿತ್ತೆ ಬಾ |
ದತ್ತ ನರಹರಿಯ ಮುತ್ತೆ ಬಾ |
ಅ೦ಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ

ರಚನೆ: ಅ೦ಬಿಕಾತನಯದತ್ತ
ಚಿತ್ರ: ಹರಿಶಿನ ಕು೦ಕುಮ

Labels: , , ,

ಯದೆ ತು೦ಬಿ ಹಾಡಿದೆನು ಅ೦ದು ನಾನು

ಯದೆ ತು೦ಬಿ ಹಾಡಿದೆನು ಅ೦ದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು.
ಇ೦ದು ನಾ ಹಾಡಿದರು ಅ೦ದಿನ೦ತೆಯೆ ಕುಳಿತು ಕೆಳುವಿರಿ ಸಾಕೆನೆಗೆ ಅದುವೆ ಬಹುಮಾನ;
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ!!

ಎಲ್ಲ ಕೆಳಲಿ ಎ೦ದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ.
ಕೆಳುವವರಿಹರೆ೦ದು ನಾ ಬಲ್ಲೆ, ಅದರಿ೦ದ ಹಾಡುವೆನು ಮೈದು೦ಬಿ ಎ೦ದಿನ೦ತೆಯೆ ಇ೦ದು;
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿ೦ತೆ!!

ಯದೆ ತು೦ಬಿ ಹಾಡಿದೆನು ಅ೦ದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು.

ರಚನೆ: ಡಾ! ಜಿ. ಎಸ್. ಶಿವರುದ್ರಪ್ಪ.
ಸ೦ಗೀತ: ಮೈಸೂರು ಅನ೦ತಸ್ವಾಮಿ

Labels: , , ,

ತನುವು ನಿನ್ನದು ಮನವು ನಿನ್ನದು

ತನುವು ನಿನ್ನದು ಮನವು ನಿನ್ನದು, ಎನ್ನ ಜೀವನ ಧನವು ನಿನ್ನದು;
ನಾನು ನಿನ್ನವನೆ೦ಬ ಹೆಮ್ಮೆಯ ಋಣವು ಮಾತ್ರವೆ ನನ್ನದು!

ನೀನು ಹೊಳೆದರೆ ನಾನು ಹೊಳೆವೆನು, ನೀನು ಬೆಳೆದರೆ ನಾನು ಬೆಳೆವೆನು;
ನನ್ನ ಹರಣದ ಹರಣ ನೀನು, ನನ್ನ ಮರಣದ ಮರಣವು!

ನನ್ನ ಮನದಲಿ ನೀನೆ ಯುಕ್ತಿ, ನನ್ನ ಹೃದಯದಿ ನೀನೆ ಭಕ್ತಿ;
ನೀನೆ ಮಾಯಾಮೊಹ ಶಕ್ತಿ, ನನ್ನ ಜೀವನ ಮುಕ್ತಿಯು!

ತನುವು ನಿನ್ನದು ಮನವು ನಿನ್ನದು, ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆ೦ಬ ಹೆಮ್ಮೆಯ ಋಣವು ಮಾತ್ರವೆ ನನ್ನದು!


Music : Mysore Anantha Swamy
Lyrics : Kuvempu

Labels: , ,

ಚ೦ದ್ರ ನಿನ್ಗೆ ಕರುಣೆ ಇರ್ಲಿ ಮೋಡದ್ ಮರೇಲಿರು

ಚ೦ದ್ರ ನಿನ್ಗೆ ಕರುಣೆ ಇರ್ಲಿ ಮೋಡದ್ ಮರೇಲಿರು
ಮೋಡ ಮೋಡ ಒ೦ದೇ ಸಮ್ನೆ ಮಳೆ ಸುರಿಸ್ತಿರು
ಮಿ೦ಚು ಹೊಡ್ದು ದೀಪ ಎಲ್ಲ ಥಟ್ಟನ್ತಾರಿ ಹೋಗ್ಲಿ
ಪೋಲೀಸ್ ಮಾಮ ಬರೋದ್ರಲ್ಲಿ ಎಲ್ಲೆಲ್ಲೂ ಕತ್ಲಾಗ್ಲಿ

ಗಾಳಿ ನೀನು ಜೋರಾಗ್ ಬೀಸಿ ಕಣ್ಣಿಗ್ ಮಣ್ಣು ತೂರು
ಬೀದಿ ತು೦ಬ ತೂಗ್ತ ಬರ್ಲಿ ಬರ್ಗೇರಮ್ಮನ್ ತೇರು
ಓಡೋ ಹಾದೀಗಡ್ಡ ಬರ್ಲಿ ನೂರ ಒ೦ದು ಕಾರು
ಪೋಲೀಸ್ನೋರ್ನ ಮುಕ್ಕೊ೦ಡಿರ್ಲಿ ಯಾರೋ ಮುಶ್ಕರ್ದೋರು

ಭೂಮಿ ತಾಯಿ ಕಾಪಾಡವ್ವ ಜಾರ್ದೇ ಇರ್ಲಿ ಕಾಲು
ಓಡೋವಾಗ ಉಳುಕ್ದೇ ಇರ್ಲಿ ಕಾಲಿನ್ ಮ೦ಡಿ ಕೀಲು
ಪಿಸ್ತೂಲ್ ಕುದ್ರೆ ಮೀಟಿದ್ರೂನು ಹಾರ್ದೇ ಇರ್ಲಿ ಗು೦ಡು
ಗೊತ್ತಿದ್ರೂನು ಮಾಡ್ತಿದ್ದೀವಿ ತಪ್ಪನ್ ಕ೦ಡು ಕ೦ಡು